Monday, April 26, 2010

ವರ್ಷಾವು ಕಳೆದಾವೋ ..

ಇವತ್ತಿಗೆ ನನ್ನ ಬ್ಲೊಗಗೆ ಸರಿಯಾಗಿ ಎರಡು ವರ್ಷ ತುಂಬಿತು. ಅಂಬೆಗಾಲಿಡುತ್ತ .. ನಿಧಾನವಾಗಿ ನಡೆಯಲು ಕಲಿಯುವಷ್ಟರಲ್ಲಿ
ಮತ್ತೆ ಬೆಳವಣಿಗೆ ನಿಂತು ಹೊಯಿತು. ಅಂದರೆ ಎರಡು ವರ್ಷದಲ್ಲಿ ನಾನು ಬರೆದ ಬರಹಗಳು ಬೆರಳೆಣಿಕೆಯಷ್ಟು.
ಪ್ರತಿ ಬಾರಿ ಉತ್ಸಾಹದಿಂದ ಎನಾದರು ಬರೆಯೋಣ ಅಂತ ಪ್ರಾರಂಭಿಸಿ .. .... ಅಷ್ಟೆ ಪ್ರಾರಂಭ ಮಾತ್ರ .. ಕೋನೆ
ಕಂಡಿರುವುದು ಕೆಲವು ಮಾತ್ರ .. ಒಮ್ಮೊಮ್ಮೆ ಈ ಬ್ಲೊಗ್ ಬರೆಯೋದು ಸಾಕು , ಸುಮ್ನೆ ಲಿಂಕ್ ತೆಗೆದು ಹಾಕಿ ಬಿಡೋಣ ಎನ್ನಿಸುವಷ್ಟು ಸಿಟ್ಟು ನನ್ನ ಮೇಲೆ ಬರುತ್ತದೆ, ಆದರೂ ಯಾಕೊ ತೆಗೆದು ಹಾಕಲು ಮನಸಿಲ್ಲ. ಅಪರೂಪಕ್ಕೊಮ್ಮೆ ಬರೆದರು
ನೀವು ಬಂದು ಓದಿ ಪ್ರೊತ್ಸಾಹಿಸುತ್ತಿರಿ. ಅಷ್ಟೆ ಮತ್ತೆ ಆಸೆ ಚಿಗುರುತ್ತದೆ.
ಮುಂದಿನ ಬರಹಗಳು ಇದೆ ರೀತಿಯಲ್ಲಿ ಸಾಗುತ್ತವೆಯೋ ಅಥವಾ ಮತ್ತಷ್ಟು ಬರೆಯಲು
ಶಕ್ತಿ ಮತ್ತು ಸ್ಪೂರ್ಥಿ ಸಿಗುವುದೊ ಕಾದು ನೋಡ ಬೇಕಷ್ಟೆ.

Thursday, April 1, 2010

ವಯನಾಡ ಪ್ರವಾಸ -೩

ಬಾಣಾಸುರ ಅಣೆಕಟ್ಟನ್ನು ತಲುಪಲು ನಮಗೆ ಪೂಕೊಡ್ ಲೇಕನಿಂದ ಸುಮಾರು ಎರಡು ಗಂಟೆಗಳಷ್ಟು ಸಮಯ ಬೇಕಾಯಿತು.
ರ‍ಸ್ತೆ ಚೆನ್ನಾಗಿದ್ದರೂ ದೊಡ್ಡ ದೊಡ್ಡ ತಿರುವುಗಳಿವೆ. ಸರಿಯಾಗಿ ೧ ಗಂಟೆಗೆ ಬಾಣಾಸುರ ಅಣೆಕಟ್ಟಿನ ಹತ್ತಿರ ಬಂದೆವು.



ಇದು ಅತ್ಯಂತ ದೊಡ್ಡ ಹಾಗು ಸುಂದರ ಅಣೆಕಟ್ಟು. ಹಲವಾರು ಎಕರೆ ಪ್ರದೇಶ ಕೇವಲ ನೀರಿನಿಂದ ಆವೃತವಾಗಿದೆ.
ಇದರ ನಿರ್ಮಾಣಕ್ಕೆ ಸುಮಾರು ೨೫ ವರ್ಷಗಷ್ಟು ಸಮಯ ಹಿಡಿಯಿತು ಎಂದು ಪ್ರವೇಶ ದ್ವಾರದಲ್ಲಿದ್ದ ಗಾರ್ಡ್ ಒಬ್ಬರಿಂದ
ತಿಳಿದು ಕೊಂಡೆ ಅಷ್ಟೆ ಅಲ್ಲದೇ ಕೇವಲ ೫ ವರ್ಷಗಳ ಹಿಂದಿನಿಂದ ಇಲ್ಲಿಗೆ ಸಾರ್ವಜಕರಿಗೆ ಪ್ರವೇಶ ಕೊಡಲಾಗಿತ್ತಿದೆ ಎಂದು ಸಹ
ಆ ಗಾರ್ಡ ತಿಳಿಸಿದರು.



ಇಲ್ಲಿ ಬೊಟಿಂಗ್ ವ್ಯವಸ್ಥೆ ಸಹ ಇದೆ ಆದರೆ ಕೇವಲ್ ಮೋಟರ್ ಬೋಟ್ ಗಳುಮಾತ್ರ. ೫ ಜನರಿಗೆ ೩೦೦ ರೂಪಾಯಿ.
ಎರಡು ಬಗೆಯ ಮೋಟರ ಬೋಟ ಸೌಲಭ್ಯವಿದೆ. ಸ್ಲೊವ್ ಬೋಟ್ ಮತ್ತು ಸ್ಪೀಡ್ ಬೋಟ್ . ಸ್ಲೊವ್ ಬೊಟ್ನಲ್ಲಿ ಅಣೆಕಟ್ಟಿನ ಹಿನ್ನಿರಿನಲ್ಲಿ ಹೋಗಿ ಬರಲು ೨೦ ನಿಮಿಷ ಹಾಗು ಸ್ಪೀಡ್ ಬೋಟ್ನಲ್ಲಿ ೧೫ ನಿಮಿಷ.
ನಾವು ಹೋದವರು ಒಟ್ಟೂ ೬ ಜನ ಆದರೆ ಒಂದು ಬೋಟನಲ್ಲಿ ೫ ಜನರಿಗೆ ಮಾತ್ರವೇ ಪ್ರವೇಶ. ನಾನು ಇಲ್ಲಿಯೆ ಫೋಟೊ ತೆಗೆಯಿತ್ತಿರುತ್ತೇನೆ ನೀವು ಹೋಗಿಬನ್ನಿ ಎಂದು ಉಳಿದವರಿಗೆ ಹೇಳಿದೆ. ನನ್ನ ಅದೃಷ್ಟಕ್ಕೆ ಮತ್ತೊಂದು ಬೋಟಿನಲಿ ಹೋಗುವವರು ಕೇವಲ ೪ ಜನ್ ಮಾತ್ರವಿದ್ದರು ಆದ್ದರಿಂದ ನಾನು ಅವರೋಡನೆ ಹೋಗುವುದು ಎಂದು ಮಾತಾಯಿತು. ಬೊಟಿಂಗ್ ಮಾಡುವಾಗ ಆದ ಮಜ ಮತ್ತು ಕಂಡ ಪ್ರಕೃತಿ ಸೌಂದರ್ಯ ಹೇಳಲು ಸಾಧ್ಯವಿಲ್ಲ ನೋಡಿಯೇ ಸವಿಯ ಬೇಕು. ನೀರು ಬರ್ರ್ ನೆ ಮೈಗೆ ಹಾರುತ್ತಿತ್ತು.ಆದರು ಕಷ್ಟಪಟ್ಟು ಒಂದಿಷ್ಟು ಫೋಟೊಗಳನ್ನು ಕ್ಲಿಕ್ಕಿಸಿದೆ.






ಮಧ್ಯಾನದ ಉರಿ ಬಿಸಿಲು. ಹಸಿವಾಗುತ್ತಿದೆ. ಆದರು ಹತ್ತಿರದಲ್ಲಿ ಯಾವುದೇ ಹೋಟೆಲ್ ಇರಲಿಲ್ಲ. ಅಣೇಕಟ್ಟು ಜನಸಂಪರ್ಕ ಜಾಗಕ್ಕಿಂತ ಸ್ವಲ್ಪ ದೂರವಿತ್ತು. ಅಲ್ಲಿ ಎರಡೆರಡು ಐಸ್ ಕ್ರೀಮ್ ತಿಂದು ಮುಂದೆ ಕುರುವ ದ್ವೀಪ ಪ್ರದೇಶಕ್ಕೆ ಹೋರಟೆವು.

ಕುರುವ ದ್ವೀಪ ಒಂದು ದಿನದ ಪಿಕ್ನಿಕ್ ಗೆ ಹೇಳಿಮಾಡಿಸಿದ ಜಾಗ. ಸುತ್ತಲೂ ಕಬಿನಿಯಿಂದ ಹರಿದು ಬರುವ ನೀರು. ಆ ನೀರಿನಲ್ಲಿಯೇ ನಡೆದು ಹೋಗಬೇಕು. ಆಮೇಲೆ. ಸ್ವಲ್ಪ ದೂರ ಕಾಡಿನಲ್ಲಿ ನಡೆದರೆ ಮುಂದೆ ಮತ್ತೆ ನೀರು. ಮಳೆಗಾಲದಲ್ಲಿ ಇಲ್ಲಿಗೆ ಹೋಗುವುದು ಸ್ವಲ್ಪ ಕಷ್ಟವೇ ಸರಿ. ನಾವು ಅಲ್ಲಿಗೆ ಹೋದಾಗ ಸುಮಾರು ೪ ಗಂಟೆ. ೫.೩೦ ಹೊತ್ತಿಗೆಲ್ಲಾ ಅಲ್ಲಿಗೆ ಪ್ರವೇಶವನ್ನು ಮುಚ್ಚುತ್ತಾರೆ.ಆದ್ದರಿಂದ ಬೇಗ ಬೇಗನೇ ನೀರಿನಲ್ಲಿ ಹೋಗಲು ಬಟ್ಟೆ ಬದಲಾಯಿಸಿ ಒಂದಿಷ್ಟು ಬಾಳೆಹಣ್ಣು ಮತ್ತು ಜ್ಯುಸ್ ತೆಗೆದು ಕೊಂಡು ಹೊರಟೆವು. ನೀರು ಸುಮಾರು ೩ ಪೀಟ್ ನಷ್ಟು ಇತ್ತು ಅಲ್ಲದೆಯೆ ಕಲ್ಲುಗಳು ಜಾರುತ್ತಿದ್ದವು. ನಿಧಾನವಾಗಿ ಒಬ್ಬರ ಕೈ ಮತ್ತೊಬ್ಬರು ಹಿಡಿದು ದ್ವೀಪ ಪ್ರದೇಶಕ್ಕೆ ಹೋದೆವು. ಪ್ರವೇಶ ದ್ವಾರದಲ್ಲಿ ಟಿಕೆಟ್ ಪಡೆದು ಮುಂದೆ ನೀರಿರುವ ಜಾಗಕ್ಕೆ ಹೋಗ ತೊಡಗಿದೇವು.
ಬೇಸಿಗೆ ಸಮಯ ಅಲ್ಲದೆ ಶಿವರಾತ್ರಿಯ ರಜೆ ಇದ್ದುದರಿಂದ ಅಲ್ಲಿಗೆ ಬಹಳಷ್ಟು ಮಂದಿ ಬಂದಿದ್ದರು. ನಾವು ಅವರೋಡಗೂಡಿ
ಸ್ವಲ ಹೊತ್ತು ನೀರಿನಲ್ಲಿ ಆಟವಾಡಿ ಮರಳಿ ಕಾರಿನತ್ತ ಹೋರಟೆವು. ಆಗಲೇ ಸಂಜೆಯಾಗ ತೋಡಗಿತ್ತು. ಮುಂದೆ ಎಲ್ಲಿಗೆ
ಎಂದು ಯಾರು ನಿರ್ಧಾರ ಮಾಡಿರಲಿಲ್ಲ. ಅದಕ್ಕಾಗಿ ಸ್ವಲ್ಪ ಹೊತ್ತು ವ್ಯಯಿಸಿ ಕೊನೆಗೆ ಮೈಸೂರಗೆ ಹೋಗಿ ಉಳಿಯುವುದು ಎಂದು ತೀರ್ಮಾನ ಮಾಡಿದೆವು.
ಸಮಯ ೬ ಗಂಟೆ. ಆದ್ದರಿಂದ ೧೦-೧೧ ಗಂಟೆಯ ಒಳಗೆಲ್ಲ ಮೈಸೂರ್ ತಲುಪ ಬಹುದು ಎಂದು ಕೊಡಿದ್ದೇವು. ಆದರೆ ನಮ್ಮ ಕಲ್ಪನೆ ತಲೆಕೆಳಗಾಗಿದ್ದು ಕೇರಳ/ಕರ್ನಾಟಕದ ಗದಿ ತಲುಪಿದಾಗ. ಇದು ಕಾಡು ಪ್ರದೇಶವಾದ್ದರಿಂದ ರಾತ್ರಿ ಸಮಯ ಪ್ರಾಣಿಗಳು ತಿರುಗಾಡುತ್ತವೆ ಎಂದು ಸಂಜೆ ೬ ರಿಂದ ಬೆಳಗ್ಗೆ ೬-೭ ವರೆಗೆ ರಸ್ತೆಗೆ ಪ್ರವೇಶ ಕೊಡುವುದಿಲ್ಲವಂತೆ. ಈ ವಿಷಯ ನಮಗೆ ತಿಳಿದಿರಲಿಲ್ಲ. ಆದ್ದರಿಂದ ನಮ್ಮ ಪ್ಲಾನ್ ಎಲ್ಲ ತಲೆಕೆಳಗಾಯಿತು. ಇನ್ನು ಮೈಸೊರಗೆ ಹೋಗಲು ಇರುವುದು ಒಂದೊ ಕೊಡಗಿನ ಮೇಲೆ [ ಗೋಣಿಕೊಪ್ಪಲ ದಾರಿ] .. ಇಲ್ಲವೋ ಸುಲ್ತಾನ್ ಬತೇರಿಗೆ ಹೋಗಿ ಮೈಸೂರ್ ಗೆ ಹೋಗುವುದು. ಆದರೆ ಅಲ್ಲಿಯೂ ಗಡಿ ಬಂದು ಮಾಡಬಹುದು ಎಂಬ ಮಾತು ಬೇರೆ. ಸರಿ ಕೊಡಗಿನ ದಾರಿಯನ್ನೆ ಹಿಡಿದೆವು. ಹೋರಟ ಮೇಲೆ ಗೊತ್ತಾಯಿತು ಈ ರಸ್ತೆಗೆ ಬರಲೇ ಬಾರದಿತ್ತೆಂದು. ಅಲ್ಲಿ ರಸ್ತೆಯೆ ಇರಲಿಲ್ಲ. ಬರಿ ಹೊಂಡ , ಹಳ್ಳ ಕೊಳ್ಳ. ಕಷ್ಟಪಟ್ಟು ಅಂತೂ ಮೈಸೂರ್ ತಲುಪಿದಾಗ ೨ ಗಂಟೆ. ಅಂದರೆ ನಮ್ಮ ಲೆಕ್ಕಾಚಾರಕ್ಕಿಂತ ೪-೫ ಗಂಟೆ ತಡವಾಗಿತ್ತು. ಇಲ್ಲಿ ಇನ್ನೊಂದು ತಲೆಬಿಸಿ.ಯಾವ ಹೋಟೆಲನಲ್ಲು ರೂಮ್ ಕಾಲಿ ಇಲ್ಲ . ಅಂತು ಇಂತು ಒಂದು ರೂಮ್ ಸಿಕ್ಕಿತು. ನಮ್ಮ ಜೋತೆ ಇದ್ದ ಮತ್ತೊಂದು ಜೋಡಿ ಅಲ್ಲಿ ಉಳಿಯುವುದೆಂದು ನಾವು
ನಡುರಾತ್ರಿಯಲ್ಲೆ ಬೆಂಗಳೂರಿಗೆ ಹೋಗುವುದು ಎಂದು ತೀರ್ಮಾನಿಸಿ ಅವರಿಂದ ಬೀಳ್ಗೊಂಡು ಬೆಂಗಳೂರಿಗೆ ಬಂದು ತಲುಪಿದಾಗ
ಸರಿಯಾಗಿ ೪.೩೦. ಮೈಸೂರ್ ಸುತ್ತ ಬೇಕೆಂಬ ಹಂಬಲವಂತು ದೂರವಾಗಿತ್ತೆನ್ನಿ. ಸಾಕಷ್ಟು ಸುಸ್ತಾಗಿತ್ತು ಮರುದಿನ ಭಾನುವಾರ ಬೇರೆ. ಅಷ್ಟೆ ಕೈ ಕಾಲು ಮುಖ ತೋಳೆದು ವಯನಾಡ ಪ್ರವಾಸದ ನೆನಪನ್ನು ಮೆಲಕು ಹಾಕುತ್ತ ನಿದ್ದೆಗೆ ಜಾರಿದೆವು.

ಅಂತರ್ಜಾಲದಲ್ಲಿ ಸಿರ್ಸಿ




ಬೆಂಗಳೂರಿಗೆ ಬಂದ ಮೇಲೆ ಊರಿನ ಸುತ್ತಮುತ್ತಲ ಸುದ್ದಿ ಕೇವಲ ಊರಿಗೆ ಫೋನ್ ಮಾಡಿದಾಗ ಮಾತ್ರ ತಿಳಿಯುತ್ತಿತ್ತು.
ಅದು ಕೇಲವು ಸುದ್ದಿಗಳು ಮಾತ್ರ. ಆದರೆ ಈಗ ಕೇಲವು ಉತ್ಸಾಹಿಗಳು ಟೀಮ್ ಸಿರ್ಸಿ ಹೆಸರಿನಲ್ಲಿ ಒಂದು ವೆಬ್ ಸೈಟ್
ತೆರೆದಿದ್ದಾರೆ. ಇಲ್ಲಿ ಸಿರ್ಸಿಯಲ್ಲಿ ಪ್ರಕಟವಾಗುವ ಮುಖ್ಯ ಪತ್ರಿಕೆ ಲೋಕಧ್ವನಿಯನ್ನು ಸಹ ಹಾಕಲಾಗುತ್ತಿದೆ.
ಇದರಿಂದ ಉತ್ತರ ಕನ್ನಡ ಜಿಲ್ಲೆಯ ಸುದ್ದಿ ಇನ್ನು ಕೇವಲ ಒಂದು ಕ್ಲಿಕ್ ದೂರದಲ್ಲಿದೆ.
ಇವಿಷ್ಟೆ ಅಲ್ಲದೇ .. ಕಥೆ , ಕವನ .. ಪ್ರವಾಸಿ ತಾಣಗಳು .. ಅಡಿಕೆ ಧಾರಣೆ .. ಜಾಹಿರಾತುಗಳು .. ಹೀಗೆ ಹಲವು
ವಿಷಯಗಳನ್ನು ಸಹ ಓದಬಹುದು. ಉತ್ಸಾಹವಿದ್ದಲ್ಲಿ .. ಕಥೆ , ಕವನ ಅಥವಾ ಲೇಖನಗಳನ್ನು ಪ್ರಕಟಿಸಲೂ ಬಹುದು.
ಬನ್ನಿ ಎಲ್ಲರೂ ಕೈಗೂಡಿಸೋಣ. ನಮ್ಮ ಜಿಲ್ಲೆಗೂ ಅಂತರ್ಜಾಲದಲ್ಲಿ ಒಂದು ಹೊಸ ಅರ್ಥ ಕೊಡೋಣ.

ಲಿಂಕ್: http://sirsi.in/

ಕನ್ನಡದಲ್ಲಿ ಓದಲು : http://sirsi.in/kannada