ಬಡ್ತಿ ಸಿಕ್ಕಿತು ಎನಗೆ ನೀ ಮಡದಿಯಾಗೆ
ಕೈ ಹಿಡಿದೆ ನೀನು ಮನಕೆ ಸಂತಸ ತಂದೆ
ಮದುರ ಕ್ಷಣವದು ಬೆರೆತಂತೆ ಹಾಲು ಜೇನು
ತನುಮನದ ರೋಮಾಂಚನ ಅರಿಯದಾದೆನು
ಕಳೆದಿದೆ ವರುಷ ತುಂಬಿ ಮನೆಮನದಲ್ಲಿ ಹರುಷ
ಒಮ್ಮೆ ಕೇಳಿದ್ದೆ ನಿನಗೆ ಕೊಡುವೆಯೆನನ್ನು
ಮೊದಲ ವರ್ಷಕ್ಕೆ ಮರೆಯದ ಕೊಡುಗೆ ...
ನಗುತ ನೀ ಹೇಳಿದೆಯನಗೆ ಕರೆದೊಯ್ಯುವೆ
ಇನ್ನೊಂದು ಬಡ್ತಿಯೆಡೆಗೆ..
ಸಂತಸದ ಕ್ಷಣವಿದು ನಾಮರೆಯೆ ಎಂದು
ಮೀಸೆ ತಿರುವುತ ಹೇಳುತಿಹೆ
ಗಂಡು ಮಗುವಿನ ತಂದೆ ನಾನಿಂದು..
ಸುಖ ಶಾಂತಿ ಅಭಿವೃದ್ಧಿ ನಮ್ಮದಾಗಿರಲಿ
ಭಗವಂತನ ದಯೆ ಎಂದೆಂದು ಹೀಗೆ ಇರಲಿ !!!!!
ಸುಮಾರು ೩ ತಿಂಗಳಿನಿಂದ ಬ್ಲಾಗ್ ಲೋಕಕ್ಕೆ ಬಂದಿರಲಿಲ್ಲ. ಈಗ ಈ ಕುಶಿಯ ಕ್ಷಣವನ್ನು ನಿಮ್ಮೊಡನೆ ಹಂಚಿಕೂಳ್ಳಬೇಕೆನಿಸಿತು
ಅದಕ್ಕೆ ಸುಮ್ಮನೆ ಮನಸ್ಸಿಗೆ ಬಂದ ಶಬ್ದಗಳನ್ನು ಪ್ರಯೋಗಿಸಿ ಕುಶಿಯನ್ನು ಹಂಚಿಕೊಂಡಿದ್ದೇನೆ. ನಿಮ್ಮೆಲ್ಲರ ಹಾರೈಕೆ
ಆಶೀರ್ವಾದ ಸದಾ ನಮ್ಮೊಂದಿಗಿರಲಿ :).
ಸಂತಸದ ಕ್ಷಣವನ್ನು ಅನುಭವಿಸಲು ಮತ್ತೆ ಬ್ಲಾಗ ಲೋಕದಿಂದ ಸ್ವಲ್ಪ ದಿನ ದೂರವಾಗುತ್ತಿದ್ದೇನೆ.
ಮತ್ತಷ್ಟು ವಿಷಯಗಳೊಡನೆ ಮರಳಿ ಅಪ್ಪಳಿಸುವೆ .. ಅಲ್ಲಿವರೆಗೆ ..............
!!! ಹೊಸ ವರುಷದ ಶುಭಾಶಯಗಳು!!!